ಅಂಬೇಡ್ಕರ್ ಕುರಿತು

ಹೋರಾಟದ ಹಾದಿಯನ್ನು
ನಂಬಿ ನಡೆದ ಶಕ್ತಿಯೇ
ಕಪ್ಪು ಜನರ ಕೆಂಪು ಕಥೆಗೆ
ನಾಂದಿಯನ್ನು ಹಾಡಿದವನೇ.

ಕುಡಿಯಲು ನೀರು ಕೊಡದ
ದೇವರ ನೋಡಲು ಬಿಡದ
ಮನುಜ ಮನುಜರ ಮಧ್ಯ
ವಿಷ ಬಿತ್ತುವ ಜನಕೆ ನೀನು.

ದುಡಿಮೆಯನ್ನು ದೋಚುತ್ತ
ಬಿಸಿ ರಕ್ತವ ಹೀರುತ್ತಾ
ನೀತಿ ಶಾಸ್ತ್ರಗಳ ರಕ್ಷೆಯಲ್ಲಿ
ಅಡಗಿ ಕುಳಿತ ಭಂಡರಿಗೆ-

ದುಃಸ್ವಪ್ನವಾಗಿ ನೀನು
ಮಹಾರಾಷ್ಟ್ರದ ಮಣ್ಣಿಂದ
ದಲಿತ ಜನಗಳ ಧ್ವನಿಯಾಗಿ
ಹುಟ್ಟಿ ಬಂದ ವ್ಯಕ್ತಿಯೇ.

ದಾಸ್ಯದ ಸಂಕೋಲೆ ಕಳಚಿ
ನೂತನ ಬದುಕು ನಡೆಸಿ,
ಸ್ವಾಭಿಮಾನದ ಮಂತ್ರ
ಹೇಳಿಕೊಟ್ಟ ಧೀರನೇ.

ನಿನ್ನ ಮನಸ್ಸಿನ ನೋವು
ಭುಗಿಲೆಂದು ಕೆರಳಿ ನಿಂತು
ಚರಿತ್ರೆಯ ಪುಟದಲ್ಲಿ ಮಿಂಚಿ
ಹೊಸ ತಿರುವು ಕೊಟ್ಟಿತಿಂದು.

ಹೆಣ್ಣಿಗೆ ಮುಕ್ತಿಯಿಲ್ಲವೆಂದ
ಬೌದ್ಧ ಧರ್ಮವ ಕೊನೆಗೆ
ಎತ್ತಿ ಹಿಡಿದು ನೀನು-
ಹೆಣ್ಣಿಗೆ ಮಾಡಿದೆ ಏನನ್ನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸದ್ದಿನ ಪೇಟೆಯಳಿಸದೆ ಸಾವಯವ ವ್ಯಾಪಾರದಿಂದೇನು ?
Next post ಸಂದರ್ಶನ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys